ದ ಪಾಲಿಟಿಕ್

ಹೆಚ್ ಡಿ ದೇವೇಗೌಡ : ಇಡೀ ನಾಡೆ ಹೆಮ್ಮೆ ಪಡುವ ರೈತಪರ ಜೀವ.

ದ ಪಾಲಿಟಿಕ್

ದ ಪಾಲಿಟಿಕ್

ದೇವೇಗೌಡರು ದೇಶದ ಪ್ರಧಾನ ಮಂತ್ರಿ ಆಗಿದ್ದವರು. ಇವರನ್ನು ಕೇವಲ ಜೆಡಿಎಸ್ ಮುಖಂಡರಾಗಿಯೋ ಅಥವಾ ಕೇವಲ ಒಕ್ಕಲಿಗರ ನಾಯಕರಾಗಿಯೋ ಕಾಣುವುದು ಸರಿಯಲ್ಲ. ಯಾರು ಹೇಗಾದರೂ ಕಾಣಲಿ ಆದರೆ ಕನ್ನಡಿಗರಾದ ನಾವುಗಳು ಮಾತ್ರ ಅವರನ್ನು ಕಾಣುತ್ತಿರುವ ರೀತಿಗಳೇ ಬೇರೆ ಇವೆ. ಅದಕ್ಕೆ ಪ್ರಬಲ ಕಾರಣಗಳೂ ಇವೆ.

ಇಲ್ಲಿ ಅಸಹನೆ ಇಲ್ಲದ ಜಾಗವೇ ಇಲ್ಲ. ಜಾತಿ-ಧರ್ಮಗಳ ನಡುವೆ ಮಾತ್ರವಲ್ಲ ಅವರವರ ಕುಟುಂಬದವರ ಬೆಳವಣಿಗೆಗಳನ್ನ ಸಹಿಸದ ಲೆಕ್ಕವಿಲ್ಲದಷ್ಟು ಅಸಹನೆಯ ಮನಸುಗಳಿಂದಲೇ ಈ ನಾಡು ತುಂಬಿ ತುಳುಕುತ್ತಿದೆ. ಈ ಸಮಾಜದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಕನ್ನಡದ ನೆಲ ಮೂಲದಿಂದ ಹೋಗಿ ದೇಶದ ಅತ್ಯುನ್ನತವಾದ ಪ್ರಧಾನ ಮಂತ್ರಿ ಸ್ಥಾನದವರೆಗೆ ಏರಿರುವುದು ಕನ್ನಡಿಗರ ಪಾಲಿಗೆ ಮತ್ತು ದಕ್ಷಿಣದ ಭಾರತೀಯರ ಪಾಲಿಗೆ ಅದೇ ಪ್ರಥಮ, ಮುಂದೆ ಯಾರಾಗುತ್ತಾರೊ ಗೊತ್ತಿಲ್ಲ. ಪ್ರಾಯಶಃ ಇವರೇ ಕೊನೆಯವರು ಆದರು ಆಗಬಹುದು.

ಕನ್ನಡಿಗನೊಬ್ಬ ಪ್ರಧಾನ ಮಂತ್ರಿಯಾದದ್ದು ಪ್ರತಿಯೊಬ್ಬ ಕನ್ನಡಿಗನು ಸಂತೋಷ ಪಡಬೇಕಾಗಿರುವ ವಿಷಯ. ದಕ್ಷಿಣ ಭಾರತದ ಕೇರಳ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂದ್ರಪ್ರದೇಶದ ಜನರು ಸಹ ದೇವೇಗೌಡರನ್ನ ದಕ್ಷಿಣದವರೆಂಬ ಕಾರಣಕ್ಕೆ ಅವರೂ ಸಹ ನಮ್ಮವರೆಂದೇ ಸ್ವೀಕರಿಸಲಿ.ಏಕೆಂದರೆ ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತದಿಂದ ಪ್ರಥಮ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದು ಇವರೇ ಮೊದಲಿಗರು. ಪ್ರಾಯಶಃ ಇವರೇ ಕೊನೆಯವರು ಆದರು ಆಶ್ಚರ್ಯವೇನಿಲ್ಲ. 

ದಕ್ಷಿಣ ಭಾರತೀಯರು ದೇಶದ ರಾಜಕಾರಣದಲ್ಲಿ ಮುನ್ನೆಲೆಗೆ ಬರಲು ಉತ್ತರ ಭಾರತದವರು ದೊಡ್ಡ ಅಡ್ಡಗಾಲು ಆಗಿದ್ದಾರೆ. ಇದು ಸಮಗ್ರ ಭಾರತದ ಕಲ್ಪನೆಗೆ ಅಪಮಾನ. ದಕ್ಷಿಣದ ಈ ಅಪಮಾನಕ್ಕೆ ಸವಲೆಂಬಂತೆ ದೇವೇಗೌಡರು ಪ್ರಧಾನಮಂತ್ರಿ ಆದದ್ದು. ದೇವೇಗೌಡರನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಧಾನ ಮಂತ್ರಿಗಳು ಉತ್ತರ ಭಾರತದವರೇ ಆಗಿದ್ದಾರೆ.  

ಇದೇ ದೇವೇಗೌಡರು ಏನಾದರು ಹುಟ್ಟಿನಿಂದ ಬ್ರಾಹ್ಮಣರಾಗಿದ್ದರೆ ಅವರನ್ನು “ವಿಶ್ವ ರೈತ ನಾಯಕ”ನ ಸ್ಥಾನಕ್ಕೆ ಏರಿಸಿ ಜಾಗತಿಕ ಮಟ್ಟದ ಪ್ರಚಾರ ಕೊಡುತ್ತಿದ್ದರು. ರಾಷ್ಟ್ರ ನಾಯಕರಾಗಲು ಮತ್ತು ರಾಷ್ಟ್ರ ನಾಯಕರಾಗಿಯೇ ಉಳಿಯಲು ಅ ಭಾರತದಲ್ಲಿ ಬ್ರಾಹ್ಮಣ್ಯ ಪಡೆಯ ಸಹಾಯ ಬೇಕೇ ಬೇಕು ಇತಿಹಾಸದ ಪುಟಗಳೆ ಹೇಳುತ್ತಿವೆ. ದೇವೇಗೌಡರ ನೇತೃತ್ವದ ಕೇಂದ್ರ ಸರ್ಕಾರ ಬಡವ, ಶ್ರಮಿಕ, ರೈತಪರ ಸರ್ಕಾರವಾಗಿತ್ತೆಂಬ ಭಾವ ದೇಶದ ದುಡಿಯುವ ವರ್ಗದ ಜನರಲ್ಲಿ ಮೂಡಿತ್ತು. ಅವರ ‘ಮಣ್ಣಿನ ಮಗ’ ಎಂಬ ಬಿರುದಾಂಕಿತ ವಿಶೇಷವಾಗಿ ರೈತರಲ್ಲಿ ಒಂದು ಭರವಸೆಯನ್ನು ಹುಟ್ಟಿ ಹಾಕಿತ್ತು.  

ದೆಹಲಿ ಕೇಂದ್ರೀತ ಉತ್ತರ ಭಾರತದ ಥಿಂಕರ್ಸ್ ಗಳ ಒಂದು ವರ್ಗ ದೇವೇಗೌಡರು ಪ್ರಧಾನಿ ಆಗಿದ್ದಾಗ ಸತತವಾಗಿ ಟೀಕಿಸಿ ಹೀಯಾಳಿಸಿದ್ದು ಉಂಟು. ಇಂಗ್ಲಿಷ್, ಹಿಂದಿ ಭಾಷಾಜ್ಞಾನ ಇಲ್ಲವೆಂದು ಜರಿದದ್ದು ಇದೆ. ಅವರಿಗಿದ್ದ ಸಾಮಾಜಿಕ ಕಳಕಳಿಯನ್ನು, ಜಾತ್ಯಾತೀತ ಮನಸ್ಥಿತಿಯನ್ನು ದೇಶದ ಮಾಧ್ಯಮಗಳು ಪ್ರಚಾರಕ್ಕೆ ತರಲೇ ಇಲ್ಲ. ಕಾರಣ ಎಲ್ಲಿ ದೇವೇಗೌಡರು ತನ್ನ ರೈತ ತನದಿಂದ ಈ ದೇಶದ ಬಹು ದೊಡ್ಡ ನಾಯಕರಾಗಿ ಹೊರಹೊಮ್ಮಬಹುವುದು ಎಂಬ ಅಸಹನೆಯಿಂದ ಅವರ ಮೇಲೆ ಟೀಕಾಪ್ರಹಾರವೇ ನಡೆದಿವೆ. 

ಅವರೊಟ್ಟಿಗೆ ಯಾವಾಗಲೂ ಪಂಚೆ, ಜುಬ್ಬ, ಟವಲ್, ಹವಾಯಿ ಚಪ್ಪಲಿ, ಸೊಪ್ಪಿನ ಸಾರು, ರಾಗಿ ಮುದ್ದೆ ಮತ್ತು ಕೃಷಿ ಚಿಂತನೆಗಳು ಇರುತ್ತಿದ್ದವು. ಇವೆಲ್ಲವೂ ಭಾರತದ ನೆಲಮೂಲ ಸಂಸ್ಕೃತಿಯ ಪ್ರತೀಕಗಳಾಗಿವೆ.

ಇಂದು ದೇವೇಗೌಡರ 91ನೆಯ ಹುಟ್ದಬ್ಬ. ಅವರು ನೂರಾರು ಕಾಲ ನಮ್ಮೊಂದಿಗೆ ಇರಲೆಂದು ಪ್ರಾರ್ಥಿಸುತ್ತೇನೆ.

– ಮನಸುಳಿ ಮೋಹನ್

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!