ಚಿತ್ರದುರ್ಗದ ಶ್ರೀ ಮುರುಘಾಮಠದ ಮಠಾಧೀಶರಾದ ಶ್ರೀ ಶಿವಮೂರ್ತಿ ಮುರುಘಾ ಶರಣರು ಭಾಗಿಯಾಗಿರುವ ಭೀಕರ ಬೆಳವಣಿಗೆಗಳನ್ನು ಮಾಧ್ಯಮ ವರದಿಗಳಿಂದ ತಿಳಿದು ನಾನು ಹೆಚ್ಚು ವಿಚಲಿತನಾಗಿದ್ದೇನೆ. ಅವರು ಈಗ ಪೋಕ್ಸೋ ಮತ್ತು ಎಸ್ಸಿ/ಎಸ್ಟಿ ಕಾಯ್ದೆಯಡಿ ಮಕ್ಕಳ ಮೇಲೆ, ವಿಶೇಷವಾಗಿ ಹೈಸ್ಕೂಲ್ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸುತ್ತಿದ್ದಾರೆ. ಮಕ್ಕಳ ಮೇಲಿನ ಯಾವುದೇ ರೀತಿಯ ಅಪರಾಧಗಳನ್ನು ಖಂಡಿಸಲು ನನ್ನಲ್ಲಿ ಯಾವುದೇ ಸಶಕ್ತ ಪದಗಳು ಇಲ್ಲ.
ಈ ಪ್ರಕರಣದಲ್ಲಿನ ಸಂತ್ರಸ್ತರ ನ್ಯಾಯಕ್ಕಾಗಿ ಹಾಗೂ ಘನತೆಗಾಗಿ 2017 ರಲ್ಲಿ ಮಠವು ನನಗೆ ನೀಡಿದ ಬಸವಶ್ರೀ ಪ್ರಶಸ್ತಿಯನ್ನು (ಮತ್ತು ಅದರಿಂದ ಬಂದ 5 ಲಕ್ಷ ರೂ. ಬಹುಮಾನದ ಮೊತ್ತವನ್ನು ಚೆಕ್ ಮೂಲಕ) ಹಿಂದಿರುಗಿಸುತ್ತೇನೆ.
ಇದನ್ನೂ ಓದಿ : ಇದೊಂದು ಸಂಚೋ ಅಥವಾ ಶ್ರೀಗಳನ್ನು ಉಳಿಸಲು ಹೂಡಿರುವ ತಂತ್ರವೋ? : ಜಾಮದಾರ್
ಘೋರ ಘಟನೆಗಳನ್ನು ಬೆಳಕಿಗೆ ತರಲು ಮೈಸೂರು ಮೂಲದ ಎನ್ಜಿಒ “ಒಡನಾಡಿ”ಯ ಪ್ರಯತ್ನಗಳು ಮತ್ತು ಸಾಮಾಜಿಕ ಅನಿಷ್ಟಗಳ ವಿರುದ್ಧ ದಶಕಗಳ ಕಾಲದ ಅವರ ಹೋರಾಟದ ಬಗ್ಗೆ ನನ್ನ ಮೆಚ್ಚುಗೆಯನ್ನು ದಾಖಲಿಸಲು ಬಯಸುತ್ತೇನೆ. ಮತ್ತು ಹಗರಣದ ತನಿಖೆಯನ್ನು ತೀವ್ರವಾಗಿ ಮುಂದುವರಿಸಲು ಮತ್ತು ಯಾವುದೇ ಆಧಾರದ ಮೇಲೆ ರಾಜಿ ಮಾಡಿಕೊಳ್ಳಲು ಅವಕಾಶ ನೀಡದಂತೆ ಕರ್ನಾಟಕ ಸರ್ಕಾರಕ್ಕೆ ನಾನು ಮನವಿ ಮಾಡುತ್ತೇನೆ.
ಪಿ. ಸಾಯಿನಾಥ್
ಪತ್ರಕರ್ತ
ಸ್ಥಾಪಕ-ಸಂಪಾದಕ
ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ
ಕನ್ನಡಕ್ಕೆ : ರೂಪ ಹಾಸನ