ದ ಪಾಲಿಟಿಕ್

ಸಿ.ಟಿ.ರವಿ ಸೋಲಿಗೆ ಸದ್ದಿಲ್ಲದೆ ನಡೆದಿದೆ ಪ್ಲಾನ್ ಆಂಡ್ ಎಸ್ಟಿಮೇಟ್ ?!

ದ ಪಾಲಿಟಿಕ್

ದ ಪಾಲಿಟಿಕ್

ಬಿಗಿಯಾದ ಬೇರುಗಳಿಲ್ಲದೇ ಹೋದರೆ ಅದು ಯಾವುದೇ ಜಾತಿಯ ಗಿಡವಾಗಲಿ, ಮರವಾಗಲಿ ಒಂದು ಸಣ್ಣ ಗಾಳಿಗೆ ಬಿದ್ದು ಹೋಗುತ್ತದೆ. ರಾಜಕಾರಣದಲ್ಲಿಯೂ ಅಷ್ಟೇ. ಎತ್ತರಕ್ಕೆ ಬೆಳೆಯುವುದಷ್ಟೇ ಮುಖ್ಯವಲ್ಲ, ಕೆಳಗಡೆ ಬೇರು ಬಿಟ್ಟುಕೊಳ್ಳುವುದು ಅದಕ್ಕಿಂತ ಮುಖ್ಯ. ಇಲ್ಲದಿದ್ದರೆ ಪತನಕ್ಕೇನು ಸಮಯವೇ ಬೇಡ. ಏಕ ಕಾಲದಲ್ಲಿಯೇ ಬೇರು ಬಿಟ್ಟುಕೊಳ್ಳುತ್ತಲೇ ಎತ್ತರಕ್ಕೇರುತ್ತಿರುವ ಸಿ.ಟಿ.ರವಿಯವರನ್ನು ಸೋಲಿಸಲೇಬೇಕೆಂಬ ಹಟ-ಹಗೆ ಇರುವುದು ಯಾವುದೋ ಲೋಕಲ್ ರಾಜಕಾರಣಿಗಳಿಗಲ್ಲ. ಖುದ್ದು ಸಿದ್ದರಾಮಯ್ಯ ಡಿಕೆಶಿ ಕ್ಯಾಂಪಿನಲ್ಲಿಯೇ ಸಿ.ಟಿ.ರವಿಯನ್ನು ಸೋಲಿಸುವ “ಟಾರ್ಗೆಟ್ ಸಿ.ಟಿ.ರವಿ” ಎಂಬ ಸ್ಕೆಚ್ಚು ಜನ್ಮತಾಳಿ ಚಿಗುರೊಡೆದಿದೆ. 

ಕಾಂಗ್ರೆಸ್ಸಿನವರ ಅಷ್ಟು ಶುಗರ್ರು, ಬಿಪಿಗಳ riseಗೆ ಸಿ.ಟಿ.ರವಿಯವರ ಸ್ಟೇಟಮೇಂಟುಗಳದ್ದೇ ಸಿಂಹಪಾಲು ಕಾರಣ. ಬಿಜೆಪಿಯಲ್ಲಿ ಪಕ್ಷನಿಷ್ಠೆಯನ್ನು ತನ್ನ ಮೌನಗಳಿಂದ ಸಾಬೀತು ಮಾಡಲು ಅವಕಾಶಗಳೇ ಇಲ್ಲ.  RSSನ ಕಮ್ಯುನಿಟಿಯವರಿಗೆ ಅಡಿಯಿಂದ ಮುಡಿಯವರೆಗೂ ಸಂತೋಷವಾಗುವಂತೆ  

ಕಾಂಗ್ರೆಸ್ಸ್ ಪಕ್ಷವನ್ನು ಮತ್ತು ಕಾಂಗ್ರೆಸ್ಸಿಗರನ್ನು ಟೀಕಿಸಿದರೇ ಮಾತ್ರ ಬಿಜೆಪಿಯಲ್ಲಿ ಪ್ರಮೋಷನ್ನು. ಬಿಜೆಪಿಯೊಳಗಿನ ಈ ಸತ್ಯವನ್ನು ತಿಳಿದಿರುವ ಸಿ.ಟಿ.ರವಿಯವರು ಜಾತಿಯಿಂದ ಒಕ್ಕಲಿಗರಾದರೂ ನೀತಿಯಲ್ಲಿ RSSನ ಬ್ರಾಹ್ಮಣ್ಯವನ್ನೇ ರವಿ ಉಸಿರಾಡುತ್ತಿರುವುದು. ರವಿಯವರಲ್ಲಿ ಹರಿಯುತ್ತಿರುವ ರಕ್ತವೂ ಕೇಸರಿ ಬಣ್ಣದ್ದೇ‌ ಎಂಬಷ್ಟರ ಮಟ್ಟಿಗೆ ಸೈದ್ಧಾಂತಿಕ ವಾದಗಳಿವೆ.

ಅವರ ಎರಡು ತುಟಿಗಳು, ಅವರ ನಾಲಗೆ ಸಿ.ಟಿ.ರವಿಯದ್ದೇ ಇರಬಹುದು. ಆದರೆ ರವಿಯವರ ಆ ತುಟಿಗಳ ನಡುವೆ ಹಾದು ಬರುವ ಮಾತುಗಳು ಮಾತ್ರ RSSನ ಬ್ರಾಹ್ಮಣ್ಯಗಳು ಹೇಳುವ ಮಾತುಗಳವು. ಈಗ ಸಿ.ಟಿ.ರವಿಯವರು ಕಾಂಗ್ರೆಸ್ ವಿರುದ್ಧ ಬೆಂಕಿ ಉಂಡೆಯಂತೆ ಸಿಡಿಯುತ್ತಿರವ “ಅಗ್ರೆಸ್ಸಿವ್ ಅಟ್ಯಾಕರ್”. RSSನ ಸ್ಟೋರಿಗಳಿಗೆ ಹಿರೋ ಆಗಲು ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ  ಬ್ಲಾಸ್ಟಿಂಗ್ ಸ್ಟೆಟಮೆಂಟುಗಳನ್ನು ಕೊಡುವ ತಾಕತ್ತನ್ನು ನೋಡಿಯೇ ಸಂತೋಷಪ್ಪನ‌ ಗ್ಯಾಂಗು ರಾಷ್ಟ್ರಮಟ್ಟದಲ್ಲಿ ಸಿ.ಟಿ.ರವಿಯವರನ್ನು ಬೆಳೆಸುತ್ತಿರುವುದು. ರಕ್ತ ಬಿಸಿ ಇರುವಷ್ಟು ದಿನ ಸಿ.ಟಿ.ರವಿಯವರ ತಾಕತ್ತನ್ನು RSSಬಳಸಿಕೊಳ್ಳಲಿದೆ.

ಸಿ.ಟಿ.ರವಿಯ ಹೆಗಲ ಮೇಲೆ RSS  ತನ್ನ ಗನ್ನನ್ನು ಇಟ್ಟಿದೆ.‌ ಆ ಗನ್ನನ್ನು ತನ್ನ ಹೆಗಲ ಮೇಲೆ‌ ಇಡುಲು ಸಿ.ಟಿ ರವಿ ಎಷ್ಟು ದಿನ ಸಮರ್ಥರೋ ಅಷ್ಟು ದಿನ RSSಗೂ ಸಿ.ಟಿ.ರವಿ ಸಮರ್ಥ ಸೈನಿಕನೇ. ಈ ಕಾರಣಕ್ಕೆ ಕಾಂಗ್ರೆಸೆಂಬ ಕಾಂಗ್ರೆಸ್ಸು “ಟಾರ್ಗೆಟ್ ಸಿ.ಟಿ.ರವಿ” ಎಂಬ ಟೈಟಲ್ ಮೂಲಕ ಸಿ.ಟಿ.ರವಿಯನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಲು ರಾಜ್ಯದ ಪ್ರಮುಖ ಲೆಪ್ಟಿಸ್ಟುಗಳೆಲ್ಲಾ ಸೇರಿಕೊಂಡು ಸಿದ್ದು-ಡಿಕೆಶಿಯನ್ನು ಒಂದು ಮಾಡುವುದರ ಮೂಲಕ ಸ್ಕೆಚ್ಚುಗಳ ಮೇಲೆ ಸ್ಕೆಚ್ಚುಗಳನ್ನು ಸ್ಟಡಿ ಮಾಡಿ, ರೆಡಿ ಮಾಡಿ ಸಿ.ಟಿ.ರವಿಯನ್ನು ಸೋಲಿಸುವ ಬ್ಲೂಪ್ರಿಂಟ್ ಸದ್ಯದಲ್ಲೇ ಪೈನಲ್ ಆಗಲಿದೆ.

ಅಷ್ಟು ಲೆಪ್ಟಿಸ್ಟ್  ಕ್ಯಾಂಪುಗಳ ಪಾಲಿಗೆ ಸಿ.ಟಿ.ರವಿ ಮೊದಲಿನಿಂದಲೂ ವಿಲನ್. ಈಗ ಅದೇ ರವಿ ಕೇವಲ ವಿಲನ್ನಾಗಿ ಉಳಿದಿಲ್ಲ. ರೈಟಿಸ್ಟ್ ವಿಲನ್-ಗಳ ಗ್ಯಾಂಗಿಗೆ ರವಿ “ಮಾಸ್ಟರ್ ಆಪ್ ವಿಲನ್” ಆಗಿ ಎಮರ್ಜ್ ಆಗಿದ್ದಾರೆ. ಸಿ.ಟಿ.ರವಿ ಕೇವಲ ರಾಜಕೀಯಕ್ಕೆ ಅಂಟಿಕೊಂಡಿದ್ದರೆ ಲೆಪ್ಟುಗಳು ತಲೆನೂ ಕೆಡಿಸಿಕೊಳ್ಳುತ್ತಿರಲಿಲ್ಲ, ತೊಡೆನೂ ತಟ್ಟುತ್ತಿರಲಿಲ್ಲ.‌ ಆದರೆ ಸಿ.ಟಿ.ರವಿ ಲೆಪ್ಟುಗಳ ಪಾಲಿಗೆ ಈಗ ಧರ್ಮ ಸಂಘರ್ಷಗಳ ಬೀಜ ಮತ್ತು ಬೆಂಕಿ. ಈ ಕೋಮು ಬೀಜದ ಮೊಳಕೆ, ಚಿಗುರನ್ನು ಚಿವುಟಲೆಂದೇ, ಧರ್ಮದ ಹೆಸರಲ್ಲಿ ಉರಿಯುವ ಸಿ.ಟಿ ರವಿ ಎಂಬ ಬೆಂಕಿಯನ್ನು ಆರಿಸಲೆಂದೇ ಸಿ.ಟಿ. ರವಿಯವರ ಸೋಲು ಲೆಪ್ಟುಗಳಿಗೆ ತೀರ ಅಗತ್ಯವಾಗಿದೆ. 

ಡಿ.ಕೆ.ಶಿ, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾವ ಮುಖಂಡರನ್ನೂ ಸಿ.ಟಿ.ರವಿ ಬಿಟ್ಟಿಲ್ಲ. ಬಿಡುತ್ತಲೂ ಇಲ್ಲ‌. ಇದು ಸಿ.ಟಿ.ರವಿಯವರ ಸ್ವಾತಂತ್ರ್ಯ ಎಂದು ಸುಮ್ಮನೆ ಕೂರಲಿಕ್ಕೆ ಕಾಂಗ್ರೆಸ್ಸಿಗರಿಗೆ ಇರುವ ಸೀನಿಯಾರಿಟಿಗೆ ಮುಖಭಂಗವಾಗಿದೆ. ಆ ಹುಡುಗನ (ರವಿ) ಕೈಯಲ್ಲಿ ಇಂತಹ ಆರೋಪಗಳನ್ನು ಕೇಳುವುದೇ? ಎಂಬ ಕೊರಗಿಗೆ ಉತ್ತರವಾಗಿ ಈ ಬಾರಿ ಸಿ.ಟಿ.ರವಿಯವರನ್ನು ಸೋಲಿಸಲೇಬೇಕೆಂಬ “ಗಟ್ಟಿ ನಿರ್ಣಯವೊಂದು “ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿಯಲಿದೆ.

ಅಷ್ಟಕ್ಕೂ ಸಿ.ಟಿ.ರವಿ ವಿಧಾನಸಭೆಗೆ ಸ್ಪರ್ಧೆ ಮಾಡುತ್ತಾರಾ?  ಅಥವಾ ಉಡುಪಿ ಚಿಕ್ಕಮಗಳೂರು ಲೋಕಸಭೆಗೆ ಹೋಗುತ್ತಾರಾ? ಎಂಬ ಪ್ರಶ್ನೆಗಳು ಎದ್ದು ಕುಂತಿವೆ. ಒಂದು ಊರಿಮಾರಮನನ್ನು ತಂದು ನಿಲ್ಲಿಸಿದರು ಬಿಜೆಪಿಯಲ್ಲಿ ಎಂ.ಪಿ ಆಗಲು ಸುಲಭವಿರುವ ಕ್ಷೇತ್ರವಿದು. ಅಂತದ್ದರಲ್ಲಿ ಸಿ.ಟಿ.ರವಿಯನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸುವುದು ಸಾಧ್ಯವೇ ಇಲ್ಲದ ಮಾತು. ರವಿಯವರು ಒಮ್ಮೆ ಲೋಕಸಭೆಗೆ ಹೋಗಿ ಸೆಂಟ್ರಲ್ ಮಿನಿಸ್ಟರ್ ಆಗುವ ಆಸೆ ಇದೆ. ಆದರೆ ಆ ಆಸೆಯನ್ನು ಸಿ.ಟಿ.ರವಿ ಬಚ್ಚಿಟ್ಟುಕೊಂಡಿದ್ದಾರಷ್ಟೇ.. 

ಇದನ್ನೂ ಓದಿ : ಸಿದ್ದೇಶ್ವರ ಸ್ವಾಮೀಜಿ ಮೋದಿಯನ್ನಲ್ಲದೆ, ಬಸವಣ್ಣನನ್ನ ಹೊಗಳುತ್ತಾರೆಯೇ?!

ಆದರೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿಯನ್ನು ಸೋಲಿಸುವ ಪ್ಲಾನು ಕಳೆದ  ಇಪತ್ತು ವರ್ಷದಿಂದ ಪ್ಲಾನಾಗಿಯೇ ಉಳಿದಿದೆ. ಇದಕ್ಕಾಗಿಯೇ ಈಗ ಸಾದು ಲಿಂಗಾಯತ ಜಾತಿಯ ಹರೀಶ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿ, ಕಾಂಗ್ರೆಸ್ ಪಕ್ಷದಿಂದಲೇ ಬಂಡವಾಳ ಹೂಡುವ ಲೆಕ್ಕಚಾರವೂ ನಡೆದಿದೆ.‌ ಜೆಡಿಎಸ್. ಸಿಪಿಐ, ದಲಿತ ಸಂಘಟನೆಗಳು, ಕೆಲವು ಕನ್ನಡ ಪರ ಸಂಘಟನೆಗಳ ಬೆಂಬಲ ಪಡೆದು ಹರೀಶನೆಂಬ ವ್ಯಕ್ತಿಯ ಮೂಲಕ ಲಿಂಗಾಯತರ ಸ್ಥಳೀಯರ ನಾಯಕತ್ವಕ್ಕೆ ಸಿದ್ದರಾಮಯ್ಯನ ಮೂಲಕ ಅಹಿಂದ ವರ್ಗವನ್ನೂ ಜೋಡಿಸಿ ಹರೀಶ್ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಮಾಡಲು ಎಲ್ಲ ಚರ್ಚೆಗಳು ನಡೆದಿವೆ. 

ಇಷ್ಟಕ್ಕೂ ವಿಜಯೇಂದ್ರನ ದುಡ್ಡು ಇಲ್ಲಿಗೆ ಹರಿದು ಬಂದರೂ ಆಶ್ಚರ್ಯವಿಲ್ಲ. ಯಡಿಯೂರಪ್ಪನವರನ್ನು ಇಳಿಸಿದ್ದರಲ್ಲಿ, ವಿಜಯೇಂದ್ರನಿಗೆ ಪರಿಷತ್ ಟಿಕೆಟ್ ತಪ್ಪಿಸಿ ಮಂತ್ರಿ ಆಗುವುದನ್ನು ತಡೆದ ಸಂತೋಷಪ್ಪನ ಪ್ಲಾನಿನನಲ್ಲಿ ರವಿಯದ್ದು ಸಹ ಪ್ರೈಮ್ ಪಾಟ್ನರ್ ಶಿಪ್ ಇದೆ ಎಂಬುದು BSYಕ್ಯಾಂಪು ದಪ್ಪಕ್ಷರದಲ್ಲಿ ಬರೆದುಕೊಂಡು ಕುಂತಿದೆ.

ಸಿ.ಟಿ.ರವಿಯವರು ತನ್ನ ಎದುರಿನವರು ಅದೆಷ್ಟೇ ದೊಡ್ಡ ನಾಯಕನಾಗಿರಲಿ, ಅವರಿಂದ ನಷ್ಟವಾದರೂ ಸರಿ ಮೈ‌ಮೇಲೆ ಎಳೆದುಕೊಂಡು ವಾಗ್ದಾಳಿ ನಡೆಸಿ ನಾಗಪುರದ ಪುರೋಹಿತರಿಂದ ಮಾರ್ಕ್ಸುಗಳ ಮೇಲೆ ಮಾರ್ಕ್ಸುಗಳನ್ನು ಪಡೆದು ಮುಖ್ಯಮಂತ್ರಿ ಆಗದಿದ್ದರೂ ಪರವಾಗಿಲ್ಲ “ಮುಖ್ಯಮಂತ್ರಿ ಅಭ್ಯರ್ಥಿ” ಎನ್ನುವ ಮಟ್ಟವನ್ನು ತಲುಪಿದ್ದಾರೆ‌ ಮತ್ತು RSSನವರು ತಲುಪಿಸಿದ್ದಾರೆ. 

ಹಿಂದುತ್ವ, ದೇಶಪ್ರೇಮ, ಕಾಶ್ಮೀರ, ಇಂಡಿಯಾ ಪಾಕಿಸ್ತಾನದ ಗಡಿಯಲ್ಲಿನ ವಿವಾದಗಳು, ಮಂದಿರ ಮಸೀದಿ ಚರ್ಚುಗಳ ವಿವಾದಗಳು, ಮತಾಂತರ, ಮುಸ್ಲಿಂ ಕ್ರೈಸ್ತರ ವಿರುದ್ಧದ ವಿವಾದಗಳು, ಹಿಜಾಬು, ದೇವರು ಧರ್ಮದ ವಿವಾದಗಳು ಇಂತಹ ಪ್ರಕ್ಷುಬ್ಧ ವಿಚಾರಗಳಲ್ಲಿ ಬಿಜೆಪಿಯೇತರ ಎಲ್ಲಾ ಪಕ್ಷಗಳ ನಾಯಕರ ಮೇಲೆ ವಾಗ್ದಾಳಿ ನಡೆಸಿ RSSನ್ನು ಸಂತೃಪ್ತಗೊಳಿಸುವ ಪ್ರಮುಖರಲ್ಲಿ ಸಿ.ಟಿ.ರವಿ ಈಗ ಅಗ್ರಸ್ಥಾನದಲ್ಲಿದ್ದಾರೆ. ಇದೇ ವಿಚಾರಕ್ಕೆ ಸಿ‌.ಟಿ.ರವಿಯವರನ್ನು ಚುನಾವಣೆಯಲ್ಲಿ ಸೋಲಿಸುವ ವಿಶೇಷ ಬಂಡವಾಳದೊಂದಿಗೆ ಕಾಂಗ್ರೆಸ್ ಪಕ್ಷ ತೋಳು ಮುದುರಿಕೊಂಡು ಕುಸ್ತಿಗೆ ಇಳಿಯಲಿದೆ.

ಇಷ್ಟರ ನಡುವೆ ಸಿ.ಟಿ.ರವಿಯವರನ್ನು ಸೋಲಿಸುವುದು ಅಷ್ಟು ಸುಲಭವೇ ಎಂಬುದಕ್ಕೆ ಉತ್ತರ ಹುಡುಕುತ್ತ ಹೊರಟರೆ ಸಿ.ಟಿ.ರವಿಯನ್ನು ಸೋಲಿಸುವ ಕುರುಹು ಯಾರಿಗೂ ಸಿಗುತ್ತಿಲ್ಲ. ಆದರೆ ರವಿಯವರಿಗೆ ಈ ಸಲ ಚುನಾವಣೆ ಸುಲಭವಲ್ಲ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಲಿಂಗಾಯತರು, ಮುಸ್ಲಿಮರು ಕ್ರೈಸ್ತರು, ಕುರುಬರು, ದಲಿತರು ಇತರೆ ಹಿಂದುಳಿದ ವರ್ಗದವರು ಸಿ.ಟಿ.ರವಿ ವಿರುದ್ಧ ತಿರುಗಿ ಬೀಳುವಂತೆ ಕಾಂಗ್ರೆಸ್ ಮಾಡುತ್ತಿರುವ ಪ್ಲಾನುಗಳು ಯಶಸ್ವಿ ಆದರೆ ಇದೇ ಸಿ.ಟಿ.ರವಿಯವರನ್ನು ಸೋಲಿನ ಮಾಲೆ ಹುಡುಕಿದರು ಆಶ್ಚರ್ಯವಿಲ್ಲ. 

  • ಮನಸೂಳಿ ಮೋಹನ

Share:

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

ದ ಪಾಲಿಟಿಕ್‌ ಬೆಂಬಲಿಸಿ

ನಿಷ್ಠುರವಾಗಿ, ಸತ್ಯವನ್ನು ಇದ್ದದ್ದು ಇದ್ದ ಹಾಗೆ ಹೇಳುವುದು ದ ಪಾಲಿಟಿಕ್‌ ಪತ್ರಿಕೆಯ ಮೂಲಗುಣ. ಎಲ್ಲಾ ಬಗೆಯ ಅಧಿಕಾರಸ್ಥರನ್ನು ಪ್ರಶ್ನಿಸುವುದು, ತೀಕ್ಷ್ಣ ವಿಶ್ಲೇಷಣೆಗಳ ಮೂಲಕ ಜನಸಮೂಹಕ್ಕೆ ವಾಸ್ತವಾಂಶವನ್ನು ಮುಟ್ಟಿಸುವುದು ನಮ್ಮ ಧ್ಯೇಯ. ಇದು ನಿಮ್ಮ ಬೆಂಬಲವಿಲ್ಲದೇ ಸಾಧ್ಯವಿಲ್ಲ. ನಮಗೆ ಹಣವಂತರ ಹಂಗು ಬೇಕಿಲ್ಲ; ನಿಮ್ಮ ಆರ್ಥಿಕ ಬೆಂಬಲ ಹಾಗೂ ನಿಮ್ಮದೇ ಉಸ್ತುವಾರಿ ಸಾಕು. ನಮ್ಮನ್ನು ಬೆಂಬಲಿಸಿ.

error: Content is protected !!